ನ್ಯೂಡೆಲ್ಲಿ : ಮುಟ್ಟಿನ ರಜೆ ನೀಡುವುದರಿಂದ ಮಹಿಳೆಯರಿಗೆ ಅನಾನುಕೂಲ ಮತ್ತು ಹಾನಿಕಾರಕವಾಗಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ. ಈ ವಿಷಯವನ್ನು ರಾಜ್ಯಗಳೊಂದಿಗೆ ಮತ್ತು ಇತರೆ ಸಹಭಾಗಿ ಸಂಸ್ಥೆಗಳೊಂದಿಗೆ ಚರ್ಚಿಸಲು ಮತ್ತು ಚೌಕಟ್ಟನ್ನು ರೂಪಿಸಲು ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಇದು ಕಾರ್ಯವಿಧಾನದ ವಿಷಯವಾಗಿದ್ದು, ಇದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ. ನ್ಯಾಯಮೂರ್ತಿ ಪಾರ್ಥಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ. ನ್ಯಾಯಾಲಯವು ಮಹಿಳೆಯರಿಗೆ ಈ ಮುಟ್ಟಿನ ರಜಾದಿನಗಳನ್ನು ನೀಡಲು ನಿರ್ಧರಿಸಿದರೆ, ಅದು ಅವರಿಗೆ ಅನಾನುಕೂಲ ಮತ್ತು ಹಾನಿಕಾರಕವಾಗಿ ಪರಿಣಮಿಸಬಹುದು ಎಂದು ಅನುಮಾನಿಸಿದೆ. ಪರಿಣಾಮವಾಗಿ, ಅನೇಕ ಸಂಸ್ಥೆಗಳು ಮಹಿಳೆಯರನ್ನು ಉದ್ಯೋಗಿಗಳಾಗಿ ನೇಮಿಸಿಕೊಳ್ಳದಿರಲು ಪ್ರಯತ್ನಿಸಬಹುದು ಎಂದು ಹೇಳಿದೆ.
ಶ್ರಮ ಶಕ್ತಿಯಲ್ಲಿ ಮಹಿಳೆಯರನ್ನು ತೊಡಗುವಿಕೆಯನ್ನು ಹೆಚ್ಚಿಸಲು ರಜಾದಿನಗಳು ಹೇಗೆ ಸಹಾಯ ಮಾಡುತ್ತದೆ ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ. ಈ ಮುಟ್ಟಿನ ರಜೆ ಅವರನ್ನು ಶ್ರಮ ಶಕ್ತಿಯಿಂದ ದೂರ ಮಾಡಬಹುದೆಂದು, ಅದನ್ನು ತಾವು ಬಯಸುವುದಿಲ್ಲ ಎಂದು ಹೆಚ್ಚರಿಸಿದೆ.
ಅರ್ಜಿದಾರ ಹಾಗೂ ವಕೀಲ ಶೈಲೇಂದ್ರ ತ್ರಿಪಾಠಿ ಅವರ ಪರವಾಗಿ ಹಾಜರಾದ ವಕೀಲ ರಾಕೇಶ್ ಖನ್ನಾ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯದರ್ಶಿಯವರನ್ನು ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರನ್ನು ಭೇಟಿ ಮಾಡಲು ಅವಕಾಶ ನೀಡಿದರು. ಈ ವಿಷಯದಲ್ಲಿ ರಾಜ್ಯಗಳು ಯಾವುದೇ ಕ್ರಮ ಕೈಗೊಂಡರೆ ಕೇಂದ್ರದೊಂದಿಗೆ ಸಮಾಲೋಚನೆ ನಡೆಸುವುದನ್ನು ತಡೆಯಬಾರದು ಎಂದು ಪೀಠ ಸ್ಪಷ್ಟಪಡಿಸಿದೆ.
ಈ ಹಿಂದೆ ಮಹಿಳೆಯರಿಗೆ ಮುಟ್ಟಿನ ರಜೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಈ ಸಮಸ್ಯೆ ಕಾರ್ಯವಿಧಾನದ ವಿಷಯವಾಗಿರುವುದರಿಂದ ಕೇಂದ್ರ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹಿರಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
Leave a reply